Tag: SCHOOL
-
ವಿಧ್ಯಾರ್ಥಿನಿ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ ಮನಗೂಳಿ
ತಾಲೂಕಿನ ಬಬಲೇಶ್ವರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಕಾಮಗಾರಿಗೆ ಶಾಲೆಯ ವಿದ್ಯಾರ್ಥಿಗಳು ಭೂಮಿ ಪೂಜೆ ನೆರವೇರಿಸಿದರು. ಸಿಂದಗಿ: ಜು.10ರಂದು ಗ್ರಾಮದಲ್ಲಿ ಸನ್ಮಾನ ಸಮಾರಂಭಕ್ಕೆ ಆಗಮಿಸಿದ ಸಂದರ್ಭ ಶಾಲಾ ಕಟ್ಟಡದ ಕಾಮಗಾರಿಯ ದುರಸ್ತಿ ಬಗ್ಗೆ ಶಾಲೆಯ ವಿದ್ಯಾರ್ಥಿನಿ ಸಂಧ್ಯಾ ಹಂಗರಗಿ ಮನವಿ ಮಾಡಿಕೊಂಡ ಹಿನ್ನಲೆ ಜು.30ರಂದು ಮಕ್ಕಳ ಕೈಯಿಂದಲೇ ಭೂಮಿ ಪೂಜೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿ ಮಾತುಕೊಟ್ಟಂತೆ ಸರಕಾರಿ ಪ್ರಾಥಮಿಕ…
-
ಶಾಲಾ ಕಾಲೇಜುಗಳ ರಜೆ ಮುಂದುವರಿಸಿ ಆದೇಶ
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ರಜೆ ಮುಂದುವರೆಸಿ ಆದೇಶ ಹೊರಡಿಸಲಾಗಿದೆ ವಿಜಯಪುರ: ಇಂದು ಬೆಳಗ್ಗೆ ಜಿಲ್ಲಾಧಿಕಾರಿಗಳು ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಒಂದು ದಿನದ ರಜೆ ಘೋಷಿಸಿ ಆದೇಶ ಹೊರಡಿಸಿದ್ದರು. ಆದರೆ ಇಂದು ಸಂಪೂರ್ಣವಾಗಿ ಮಳೆ ಸುರಿದು ಇನ್ನು ಮೋಡ ಕವಿದ ವಾತಾವರಣ ಇರುವುದರಿಂದ, ದಿನಾಂಕ 28 ರಂದು ಜಿಲ್ಲೆಯ ಎಲ್ಲ ಅಂಗನವಾಡಿಗಳು, ಸರ್ಕಾರಿ ಹಾಗೂ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಡ ಶಾಲೆ, ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.…
-
ಜಿಲ್ಲಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ವಿಜಯಪುರ: ಇಂದು ಬಿಟ್ಟು ಬಿಡದೆ ಸುರಿಯುವ ಮಳೆ ಸಂಭವವಿದ್ದು ಆದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮುಂಜಾಗೃತ ಕ್ರಮವಹಿಸಿದೆ. ಅಂಗನವಾಡಿಗಳು, ಶಾಲೆಗಳು, ಪಿಯು ಕಾಲೇಜುಗಳಿಗೆ ಇಂದು ಒಂದು ದಿನದ ರಜೆ ಘೋಷಿಸಿದ್ದು. ಪದವಿ ಕಾಲೇಜು, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಹಾಗೂ ವಿಶ್ವ ವಿದ್ಯಾಲಯಗಳು ಎಂದಿನಂತೆ ನಡೆಯಲಿದೆ. ಜಿಲ್ಲೆಯಾದ್ಯಂತ ತೀವ್ರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭೂಬಾಲನ್ ಮುಂಜಾಗೃತ ಕ್ರಮವಹಿಸಿ ಒಂದು ದಿನದ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
-
ಕಿಡ್ ಜೀ ಚಿಕ್ಕಮಕ್ಕಳಿಗಾಗಿ ನೂತನ ಶಾಲೆ ಆರಂಭ
ಸಿಂದಗಿ: ನಗರದ ಬಂದಾಳ ರಸ್ತೆಯಲ್ಲಿರುವ ಶಾಂತವೀರ ನಗರದಲ್ಲಿ ನೂತನವಾಗಿ ಕಿಡ್ ಜೀ ಶಾಲೆಯನ್ನು ನೂತನ ಶಾಸಕ ಅಶೋಕ್ ಮನಗೂಳಿ ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಅವರು ಚಿಕ್ಕ ಮಕ್ಕಳಿಗಾಗಿ ಒಂದು ಅತ್ಯುನ್ನತ ಸೌಲಭ್ಯವುಳ್ಳ ಶಾಲೆಯು ಪರಿಸರ ದಿನದಂದು ಸಸಿ ನೀಡಿ ಸ್ವಾಗತಿಸಿರುವುದು ಶಾಲಾ ಸಂಸ್ಥಾಪಕ ವೆಂಕಟೇಶ್ ಆರ್ ಗುತ್ತೇದಾರ ಅವರು ಸಾಮಾಜಿಕ ಕಳಕಳಿ ಎತ್ತಿ ತೋರಿಸುತ್ತದೆ. ವೆಂಕಟೇಶ್ ಅವರು ನಗರದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದು ಇಂದು ಪ್ಲೇ ಹೋಮ್, ನರ್ಸರಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ಪ್ರಾರಂಭಿಸಿ…