Tag: #congress
-
ಇದುವರೆಗೂ “ಸಿ.ಎಂ” ಆಯ್ಕೆ ಆಗಿಲ್ಲ ರಣದೀಪ್ ಸಿಂಗ್ ಸುರ್ಜೆವಾಲ
ನವದೆಹಲಿ: ಕಾಂಗ್ರೆಸ್ ಉಸ್ತುವಾರಿ ಇಂದು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಇದುವರೆಗೂ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ 48ರಿಂದ 72ಗಂಟೆಗಳಲ್ಲಿ ಸ್ಪಷ್ಟಪಡಿಸುವರು ಸುಮ್ಮನೆ ಗೊಂದಲ ಸೃಷ್ಟಿ ಬೇಡ. ಬಿಜೆಪಿಯವರು ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಹುದ್ದೆ ಕುರಿತು ಪಕ್ಷದ ಪ್ರಮುಖರು ಚರ್ಚೆ ಮಾಡುತ್ತಿದ್ದಾರೆ. ಮೊದಲ ಮಂತ್ರಿ ಮಂಡಲದಲ್ಲಿ ನಾವು ನೀಡಿರುವ 5ಗ್ಯಾರಂಟಿಗಳನ್ನು ಜಾರಿಗೆ ತರುತ್ತೆವೆ. ಭ್ರಷ್ಟಾಚಾರ ಮುಕ್ತವಾದ, ಸರಳ ಹಾಗೂ…
-
ಸಮ್ಮಿಶ್ರ ಸರ್ಕಾರ ಉರುಳಿಸಲು ಸಿದ್ದರಾಮಯ್ಯ ಕಾರಣ?
ಸಾಮಾಜಿಕ ಜಾಲತಾಣ: ಮಾಜಿ ಆರೋಗ್ಯ ಸಚಿವ ಗುಲಾಂ.ಕೆ.ಸುಧಾಕರ ತಮ್ಮ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇಂದು ಹಾಕಿರುವ ಒಂದು ಪೋಸ್ಟ್ ಸಂಚಲನ ಮೂಡಿಸಿದೆ. ಅವರು ಹಿಂದಿನ ಜೆಡಿಎಸ್-ಕಾಂಗ್ರೇಸ್ ಸಮ್ಮಿಶ್ರ ಸರಕಾರ ಬೀಳಿಸುವ ಹುನ್ನಾರದ ಬಗ್ಗೆ ಕೆಲವು ಸಂಗತಿಗಳನ್ನು ಹೊರಹಾಕಿದಂತೆ ಕಾಣಸಿಗುತ್ತಿದೆ. 2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ…
-
ಭೂಸನೂರ ಒಳ್ಳೆಯವರು ಆದರೆ ಪಕ್ಷದ ಸಿದ್ದಾಂತವನ್ನು ಮುಸ್ಲಿಂರು ವಿರೋಧಿಸುವೆವು ; ಎಸ್.ಎಂ.ಪಾಟೀಲ
ಸಿಂದಗಿ: ಮುಸ್ಲಿಂರು ಬಿಜೆಪಿಗೆ ಬೆಂಬಲ ಕೊಡುತ್ತಿಲ್ಲ ಕೆಲವು ವ್ಯಕ್ತಿಗಳು ಮಾತ್ರ ಹೋಗಿದಕ್ಕೆ ಸಮಾಜವೆ ಹೋಗಿದೆ ಎಂಬುದು ತಪ್ಪು ಎಂದು ಕಾಂಗ್ರೇಸ್ ಪಕ್ಷದ ವಕ್ತಾರರಾದ ಎಸ್.ಎಂಪಾಟೀಲ ಗಣಿಯಾರ ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಚುನಾವಣೆಗು ಮುನ್ನ 2ಬಿ ಮಿಸಲಾತಿಯನ್ನು ಬಿಜೆಪಿ ಪಕ್ಷ ಕೈ ಬಿಟ್ಟಿರುವುದು ರಾಜ್ಯವ್ಯಾಪಿ ವಿರೋಧವ್ಯಕ್ತ ಪಡಿಸಲಾಗುತ್ತಿದೆ. ಬಿಜೆಪಿಯು ಗೋಹತ್ಯೆ ನೆಪದಲ್ಲಿ ಮುಸ್ಲಿಂರನ್ನು ಹಿಂಸಿಸಲಾಗುತ್ತಿದೆ, ಹಿಜಾಬ್ ವಿಷಯವನ್ನು ನ್ಯಾಯಾಲಯದ ವರೆಗೆ ತೆಗೆದುಕೊಂಡು ಹೋದರು, ಗುಡಿ-ಮಂದಿರಗಳ ಮುಂದೆ ಮುಸ್ಲಿಂರು ವ್ಯಾಪಾರ ಮಾಡಬೇಡಿ ಎಂದು ತಡೆಹಿಡಿದರು, ಅಜಾನ್ ಗಳು…
-
ನಾವು ರಾಜಕಾರಣ ಮಾಡುತ್ತಿರುವುದೆ ಪಕ್ಕಾ ಅಂಬೇಡ್ಕರ ವಾದದ ರಾಜಕಾರಣ ; ಎನ್.ಮಹೇಶ್
ಕೊಳ್ಳೇಗಾಲ : ಸಂವಿಧಾನ ಬದಲಿಸಲು ಅದೆನ್ನು ಮಗ್ಗಿಪುಸ್ತಕ ಅಲ್ಲ ಹರಿ,ಹರ,ಬ್ರಹ್ಮ ಬಂದರು ಸಂವಿಧಾನ ಬದಲಿಸಲು ಬಿಡಲ್ಲ ಅಪಪ್ರಚಾರ ಮಾಡುವುದು ಬಿಡಿ ಎಂದು ಶಾಸಕ ಎನ್.ಮಹೇಶ್ ಗುಡುಗಿದರು. ಮತಕ್ಷೇತ್ರದ ದಲಿತ ಕಾಲೋನಿಗೆ ಮತಯಾಚನೆಗೆ ತೆರಳಿದ ಅವರು ಕಾಂಗ್ರೇಸ್ ಬಿಜೆಪಿ ವಿರುದ್ದ ಅಪಪ್ರಚಾರ ಮಾಡುತ್ತಿದೆ. 70 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೇಸ್ ಸಂವಿಧಾನದ ಬಗ್ಗೆ ಚರ್ಚೆ ಮಾಡಲಿಲ್ಲ ಯಾಕೆ? ಬಿಜೆಪಿ ಸರಕಾರದಲ್ಲಿ ಆರು ದಿನಗಳ ಕಾಲ ಅಧಿವೇಶನದಲ್ಲಿ ಚರ್ಚೆಮಾಡಲಾಯಿತು. ಬಿಜೆಪಿ ಯವರು ಸಂವಿಧಾನ ಬದಲಿಸುತ್ತಾರೆ ಎಂದು ಮಾತನಾಡುತ್ತಿರಿ ಹರಿ,ಹರ,ಬ್ರಹ್ಮ…
-
ಸುದೀಪ್ರನ್ನು ನಾಮಪತ್ರಕ್ಕೆ ಕರೆತರುವ ಪರಿಸ್ಥಿತಿ ಬೊಮ್ಮಾಯಿಗೆ ಬರಬಾರದಿತ್ತು ; ಶಿವಾನಂದ ಪಾಟೀಲ
ಸಿಂದಗಿ : ಅಂದು ಬಿಜೆಪಿ ಕಟ್ಟಿ ಬೆಳಸಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶಟ್ಟರ್ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿಯವರು ದುಡ್ಡಿನ ಹೊಳೆ ಹರಿಸಿದ ಕಾರಣ ಉಪ ಚುನಾವಣೆಯಲ್ಲಿ ಭೂಸನೂರ ಜಯಗಳಿಸಿದ್ದಾರೆ ಎಂದು ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಹೇಳಿದರು. ಮಾಂಗಲ್ಯ ಭವನದಲ್ಲಿ ನಡೆದ ಕಾಂಗ್ರೇಸ್ ಪ್ರಚಾರ ಸಭೆಯ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಮುಖ್ಯಮಂತ್ರಿಗಳು ತಮ್ಮ ಸಾಧನೆ ಮೇಲೆ ಮತಗಳನ್ನು ಕೇಳಬೇಕು ವಿನಃ ಚಿತ್ರ ನಟರನ್ನು…